2014ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[ಬದಲಾಯಿಸಿ]
- ಕನ್ನಡದ ಖ್ಯಾತ ಲೇಖಕ, ವಿಮರ್ಶಕ ಡಾ.ಜಿ.ಎಚ್. ನಾಯಕ ಅವರು ೨೦೧೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ‘ಉತ್ತರಾರ್ಧ’ ಪ್ರಬಂಧ ಕೃತಿ ಪ್ರಶಸ್ತಿ ಸಿಕ್ಕಿದೆ.
ಪ್ರಶಸ್ತಿಯು ರೂ.೧ ಲಕ್ಷ ನಗದು, ತಾಮ್ರದ ಫಲಕ, ಶಾಲು ಒಳಗೊಂಡಿದೆ. ೨೦೧೫ರ ಮಾರ್ಚ್ ೯ ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ. ಬಿ.ಎ. ವಿವೇಕ ರೈ, ಪ್ರೊ. ಪ್ರಧಾನ ಗುರುದತ್ತ ಹಾಗೂ ವೀರಣ್ಣ ದಂಡೆ ತೀರ್ಪುಗಾರರಾಗಿದ್ದರು.
ಖಗೋಳ ವಿಜ್ಞಾನಿ ಜಯಂತ ನಾರಲೀಕರ್ (ಮರಾಠಿ), ರಾಜಪಲೆಂ ಚಂದ್ರಶೇಖರ ರೆಡ್ಡಿ (ತೆಲುಗು), ಮಾಧವಿ ಸರದೇಸಾಯಿ (ಕೊಂಕಣಿ), ಸುಭಾಷ್ಚಂದ್ರನ್ (ಮಲಯಾಳಂ), ಪೂಮಣಿ (ತಮಿಳು) ಸೇರಿ ೨೨ಭಾಷೆಗಳ ಲೇಖಕರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಸ್ಕೃತ ಮತ್ತು ಮಣಿಪುರಿ ಲೇಖಕರನ್ನು 15 ದಿನದೊಳಗೆ ಆಯ್ಕೆ ಮಾಡುವುದಾಗಿ ತಿಳಿದು ಬಂದಿದೆ.
- ಪ್ರಸಿದ್ಧ ಕವಿ-ವಿಜೇತರು: ಈ ವರ್ಷ ಉತ್ಪಲ್ ಕುಮಾರ್ ಬಸು (ಬಂಗಾಳಿ), ಉಕ್ರವೋ ಗವರಾ ಬ್ರಹ್ಮ (ಬೋಡೊ), ಆದಿಲ್ ಜುಸ್ವಾಲಾ (ಇಂಗ್ಲೀಷ್), ಶಾದ್ ರಮ್ಜಾನ್ (ಕಾಶ್ಮೀರಿ),ಗೋಪಾಲ ಕೃಷ್ಣ ರಥ್(ಒಡಿಯಾ), ಜಸ್ವಿಂದರ್ (ಪಂಜಾಬಿ), ಗೋಪೆಯನ್ನು ಕಮಲ್ (ಸಿಂಧಿ) ಮತ್ತು ಮುನವ್ವಾರ್ ರಾಣಾ (ಉರ್ದು). ಶೈಲೇಂದರ್ಸಿಂಗ್ ಸಿಂಗ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವರಿಷ್ಠಾಧಿಕಾರಿ, ಇತರ ಪ್ರಖ್ಯಾತ ಕಾದಂಬರಿಕಾರರ ರಮೇಶ್ ಚಂದ್ರ ಶಾ (ಹಿಂದಿ) ಮತ್ತು ಆಶಾ ಮಿಶ್ರಾ (ಮೈಥಿಲಿ) ಜೊತೆಗೆ, ಡೋಗ್ರಿ ತಮ್ಮ ಕಾದಂಬರಿ ಪ್ರಶಸ್ತಿ ದೊರಕಿತು.
ನೋಡಿ[ಬದಲಾಯಿಸಿ]
- ಡಾ.ರಾಧಾಕೃಷ್ಣನ್ ಶಿಕ್ಷಣರತ್ನ ರಾಷ್ಟ್ರೀಯ ಪ್ರಶಸ್ತಿ;
- ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ
- 2014ನೇ ಸಾಲಿನ ಪ್ರಶಸ್ತಿ-ಕೇಂದ್ರ ಸಾಹಿತ್ಯ ಅಕಾಡೆಮಿ
ಆಧಾರ[ಬದಲಾಯಿಸಿ]
- ಸುದ್ದಿ ಮಾಧ್ಯಮ :20/12/2014ರಪ್ರಜಾವಾಣಿ/ ಮತ್ತು ಡೆಕ್ಕನ್ ಹೆರಾಲ್ಡ್ /20/12/2014/[೧][ಶಾಶ್ವತವಾಗಿ ಮಡಿದ ಕೊಂಡಿ]
- http://sahitya-akademi.gov.in/sahitya-akademi/pdf/sahityaakademiawards2014-e.pdf Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.